• "ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಗ್ರಹಕ್ಕಾಗಿ ಸಾವಯವವನ್ನು ಬೆಳೆಯಿರಿ." • "ಸ್ವಚ್ಛ ಮತ್ತು ಹಸಿರನ್ನು ಸೇವಿಸಿ - ಸಾವಯವವನ್ನು ಆರಿಸಿ." • "ಹಣಕ್ಕಾಗಿ ಮಾತ್ರವಲ್ಲ, ಹಲವರ ಆರೋಗ್ಯಕ್ಕಾಗಿ ಸಾವಯವ ಕೃಷಿ." • "ಮಣ್ಣನ್ನು ಪೋಷಿಸಿ, ಆತ್ಮವನ್ನು ಪೋಷಿಸಿ - ಸಾವಯವವಾಗಿ ಬೆಳೆಯಿರಿ." • "ಆರೋಗ್ಯಕರ ಭೂಮಿ, ಆರೋಗ್ಯಕರ ಸಸ್ಯಗಳು, ಆರೋಗ್ಯಕರ ಜನರು." • "ನಿಮ್ಮ ರೈತನನ್ನು ತಿಳಿದುಕೊಳ್ಳಿ, ನಿಮ್ಮ ಆಹಾರವನ್ನು ತಿಳಿದುಕೊಳ್ಳಿ - ಸಾವಯವಕ್ಕೆ ಹೋಗಿ." • "ರಾಸಾಯನಿಕ-ಮುಕ್ತ ಮತ್ತು ಆರೋಗ್ಯಕರ - ಅದು ಸಾವಯವ ಭರವಸೆ." • "ಪ್ರಕೃತಿಯ ಉದ್ದೇಶದಂತೆ ಸಾವಯವ ಬೆಳೆ ಬಿತ್ತಿ, ಬೆಳೆಸಿ ಮತ್ತು ತಿನ್ನಿರಿ." • "ಸಾವಯವ: ಪ್ರಕೃತಿಗೂ ಒಳ್ಳೆಯದು, ನಿಮಗೂ ಇನ್ನೂ ಒಳ್ಳೆಯದು." • "ಭೂಮಿಯಿಂದ ಭೂಮಿಗೆ - ಸಾವಯವ ಕೃಷಿ." • "ಸಾವಯವವನ್ನು ಆರಿಸಿ, ಜೀವನವನ್ನು ಆರಿಸಿ." • "ಭೂಮಿಯನ್ನು ಸಂರಕ್ಷಿಸಿ, ಸಾವಯವ ಪದ್ಧತಿಗೆ ಹೋಗಿ." • "ಪೌಷ್ಠಿಕಾಂಶಕ್ಕಾಗಿ ಕ್ರಮ ಕೈಗೊಳ್ಳಿ - ಸಾವಯವ ಕೃಷಿಯನ್ನು ಬೆಂಬಲಿಸಿ." • "ಸುಸ್ಥಿರ ವಿಕಾಸಕ್ಕಾಗಿ ಸಾವಯವ ಕ್ರಾಂತಿಯಲ್ಲಿ ಸೇರಿ." • "ಈಗಲೇ ಕಾರ್ಯನಿರ್ವಹಿಸಿ, ಬುದ್ಧಿವಂತಿಕೆಯಿಂದ ಕೃಷಿ ಮಾಡಿ - ಸಾವಯವಕ್ಕೆ ಹೋಗಿ." • "ರಾಸಾಯನಿಕಗಳನ್ನು ಬಳಸಲು ನಿರಾಕರಿಸು, ಇಂದೇ ಸಾವಯವವನ್ನು ಆರಿಸಿಕೊಳ್ಳಿ!" • "ಭಯಪಡಬೇಡಿ, ಇದು ಸಾವಯವ!" • "ಸಾಂಪ್ರದಾಯಿಕ ಪದ್ಧತಿ ಸ್ವೀಕಾರಾರ್ಹ, ಸಾವಯವ ಪದ್ಧತಿ ಸುಸ್ಥಿರ." • "ವಿಷಕಾರಿಯನ್ನು ತಿರಸ್ಕರಿಸಿ. ಸಾವಯವವನ್ನು ಅಳವಡಿಸಿಕೊಳ್ಳಿ." • "ಶುದ್ಧ ಆಹಾರ ಬೇಕು - ಸಾವಯವ ಆಹಾರ ಬೇಕು." • "ನಮ್ಮ ಗ್ರಹವನ್ನು ಒಂದೊಂದೇ ಜಮೀನಿನಿಂದ ಉಳಿಸಿ - ಸಾವಯವವನ್ನು ಆರಿಸಿ." • "ಸಾವಯವ ಕೃಷಿ: ಭೂಮಿಯನ್ನು ಗುಣಪಡಿಸುವುದು, ಅದರ ಜನರಿಗೆ ಆಹಾರ ನೀಡುವುದು." • "ಉಸಿರಾಡುವ ಗ್ರಹಕ್ಕಾಗಿ ಸಾವಯವವಾಗಿ ಬೆಳೆಯಿರಿ." • "ಸಾವಯವ ಕೈಗಳಿಂದ ಭೂಮಿಯನ್ನು ಬೆಳೆಸಿ." • "ಹಸಿರು ಕೃಷಿ, ಶುದ್ಧ ಆಹಾರ - ಅದು ಸಾವಯವ ಜೀವನ." • "ಸಾವಯವ ಜೇನುಗೂಡುಗಳಿಂದ ಸಮುದಾಯಗಳು ಅಭಿವೃದ್ಧಿ ಹೊಂದುತ್ತವೆ." • "ಒಟ್ಟಾಗಿ, ನಾವು ಸಾವಯವವಾಗಿ ಆರೋಗ್ಯಕರ ಜಗತ್ತನ್ನು ಬೆಳೆಸಬಹುದು." • "ಸ್ಥಳೀಯ, ಸಾವಯವ ಮತ್ತು ಅಭಿವೃದ್ಧಿ ಹೊಂದುತ್ತಿರುವ - ಸಮುದಾಯ ಕೃಷಿ ಅತ್ಯುತ್ತಮವಾಗಿದೆ." • "ಸಾವಯವ ರೈತರು ಭೂಮಿಯ ರಕ್ಷಕರು - ಅವರನ್ನು ಬೆಂಬಲಿಸಿ." • "ಸಮುದಾಯದೊಂದಿಗೆ ಒಗ್ಗಟ್ಟಿನಿಂದ - ಸಾವಯವವಾಗಿ ಕೃಷಿ ಮಾಡೋಣ." • "ನಿಮ್ಮ ತಟ್ಟೆಯಲ್ಲಿ ಸಾವಯವ, ನೀವು ಮೆಚ್ಚಬಹುದಾದ ಆರೋಗ್ಯ." • "ನಿಮ್ಮ ಆರೋಗ್ಯವು ಒಂದು ಹೂಡಿಕೆ, ಖರ್ಚಲ್ಲ. ಸಾವಯವ ಪದ್ಧತಿಯನ್ನು ಅನುಸರಿಸಿ." • "ಬುದ್ಧಿವಂತಿಕೆಯಿಂದ ತಿನ್ನಿರಿ - ಆರೋಗ್ಯಕರ ನಾಳೆಗಾಗಿ ಸಾವಯವವನ್ನು ಆರಿಸಿ." • "ಶುದ್ಧ ಆಹಾರವು ಉತ್ತಮ ಮನಸ್ಥಿತಿಗೆ ಸಮಾನವಾಗಿದೆ - ಸಾವಯವ ಆಹಾರ ಸೇವಿಸಿ." • "ಬಲವಾದ ರೋಗನಿರೋಧಕ ಶಕ್ತಿಗಾಗಿ, ಸಾವಯವಕ್ಕೆ ಹೋಗಿ." • "ಸಾವಯವ ಅಭಿಮಾನಿಯಾಗಿರಿ." • "ಸಾವಯವ: ಏಕೆಂದರೆ ಪ್ರಕೃತಿಗೆ ಚೆನ್ನಾಗಿ ತಿಳಿದಿದೆ." • "ಹೊಸ ಎಲೆಯನ್ನು ತಿರುಗಿಸಿ, ಸಾವಯವ ಕವಲುಗಳನ್ನು ಬಳಸಿ." • "ಅದನ್ನು ನೈಜವಾಗಿಡಿ, ಸಾವಯವವಾಗಿಡಿ." • "ಸಾವಯವವನ್ನು ಕಚ್ಚಿ, ಆರೋಗ್ಯವನ್ನು ಕಚ್ಚಿ." • "ಸಾವಯವ ಕೃಷಿಯಿಂದ ಸುಸ್ಥಿರತೆ ಪ್ರಾರಂಭವಾಗುತ್ತದೆ." • "ಭವಿಷ್ಯವನ್ನು ಕೊಯ್ಲು ಮಾಡಿ - ಇಂದು ಸಾವಯವವಾಗಿ ಗಿಡ ನೆಡಿ." • "ಸುಸ್ಥಿರ, ಜವಾಬ್ದಾರಿಯುತ ಮತ್ತು ಸಾವಯವ." • "ಸುಸ್ಥಿರ ದೃಶ್ಯಕ್ಕಾಗಿ ಹಸಿರು ಬೆಳೆಸಿ, ಸಾವಯವ ಬೆಳೆಸಿ." • "ಬೀಜದಿಂದ ಮೇಜಿಗೆ, ಸುಸ್ಥಿರವಾಗಿ ಸ್ಥಿರ - ಅದು ಸಾವಯವ." down!

ಒಂದು ಎಕರೆಗೆ ಬೇಕಾದ ಜೀವಾಮೃತ ತಯಾರಿಕೆಯ ವಿಧಾನ

ಬೇಕಾದ ಸಾಮಗ್ರಿಗಳು:-

  1. ನೀರಿನ ಡ್ರಾಂ - 250 ಲೀಟರ್ ಸಾಮರ್ಥ್ಯ-1
  2. ನೀರಿನ ಡ್ರಾಂ - 30 ಲೀಟರ್ ಸಾಮರ್ಥ್ಯ-1
  3. ನೀರಿನ ಪಾತ್ರೆ - 2 ಲೀಟರ್ ಸಾಮರ್ಥ್ಯ 2
  4. ಗೋಣಿಚೀಲ 1

ಬೇಕಾದ ಪದಾರ್ಥಗಳು:-

  1. ಹಳ್ಳಿಕಾರ್ ತಾಜಾ ಸಗಣಿ 10ಕೆಜಿ
  2. ಹಳ್ಳಿಕಾರ್ ಗೋಮೂತ್ರ -6 ಲೀಟರ್
  3. ವಿಷಮುಕ್ತ ಬೆಲ್ಲ - 1 ಕೆಜಿ
  4. ದ್ವಿದಳಧಾನ್ಯದ ಹಿಟ್ಟು -1 ಕೆಜಿ
  5. ಜಮೀನಿನ ಮಣ್ಣು- ಒಂದು ಮುಷ್ಟಿ

ಹಾಲು ಕರೆಯುವ ಗೋವುಗಳಿಗಿಂತ ಬಂಜೆಯಾದ ತಾಯಿಯಾಗದ ಅಥವಾ ಮುದಿಯಾದ ಹಳ್ಳಿಕಾರ್ ಅಥವಾ ದೇಸೀ ಗೋವುಗಳು ತಮ್ಮ ಸಂಪೂರ್ಣ ಶಕ್ತಿಯನ್ನು ಬಳಕೆ ಮಾಡಿ ಹಾಲು ಕರೆಯುವ ಗೋವುಗಳಿಗಿಂತಾ ಉತ್ಕೃಷ್ಟ ಗುಣಮಟ್ಟದ ಸಗಣಿ ಮತ್ತು ಗೋಮೂತ್ರವನ್ನು ನೀಡಬಲ್ಲುದು. ಆದ್ದರಿಂದ ಬಂಜೆಯಾದ ಅಥವಾ ಮುದಿಯಾದ ಗೋವುಗಳನ್ನು ಕಸಾಯಿಗೆ ಅಟ್ಟುವ ಬದಲಿಗೆ ರೈತರು ತಾವೇ ಸಲಹಿ ಉತ್ಕೃಷ್ಟ ಗುಣಮಟ್ಟದ ಸಗಣಿ ಮತ್ತು ಗೋಮೂತ್ರ ಪಡೆಯುವುದು ಜಾಣತನ, ಸಾಯುವ 4 ದಿನ ಮುಂಚಿತವಾಗಿ ಮಾತ್ರ ದೇಸೀ ಗೋವುಗಳು ನೆಲ ಹಿಡಿಯುತ್ತವೆ. ತಿಂಗಳಾನುಗಟ್ಟಲೆ ಮಲಗುವದಿಲ್ಲ, ಹಾಗಾಗಿ ದೇಸೀ ಗೋವುಗಳನ್ನು ಸಾಯುವವರೆಗೆ ಸಾಕುವುದು ಒಳ್ಳೆಯದು.

ಭೂಮಿತಾಯಿ ಅನ್ನಪೂರ್ಣೆ, ಸಕಲ ಧಾತುಗಳು, ಪೋಷಕಾಂಶಗಳ ಭಂಡಾರ, ಅದನ್ನು ವಿಭಜಿಸಿ ಗಿಡಗಳ ಬೇರುಗಳಿಗೆ ಒದಗಿಸುವ ಕಾರ್ಯ ಜೀವಾಮೃತದಿಂದ ಸಾಧ್ಯ.ಗೋವಿನ ಬಣ್ಣ,ಸೇವಿಸುವ ಆಹಾರ, ತಿರುಗಾಟದ ಅವಕಾಶಗಳ ಅವಲಂಬಿತವಾಗಿ ಹಳ್ಳಿಕಾರ್/ದೇಸೀ ಗೋವುಗಳ ಸಗಣಿ ಮತ್ತು ಗೋಮೂತ್ರದ ಗುಣಮಟ್ಟ ನಿರ್ಧಾರವಾಗುತ್ತದೆ ಕಪ್ಪು ವರ್ಣ ಹಾಗೂ ರೂಪಾಯಿ ಬಣ್ಣದ ರಾಸುಗಳಿಗೆ ಸೂರ್ಯನ ಶಕ್ತಿ ಹೆಚ್ಚು ಪಡೆಯುವ ಸಾಮರ್ಥ್ಯವಿದೆ.ಹಳ್ಳಿಕಾರ್/ದೇಸೀ ಗೋವುಗಳ ಕರುಳಿನಲ್ಲಿ ಕೋಟ್ಯಾನುಕೋಟಿ ಜೀವಾಣುಗಳಿದ್ದು ಸಾರಜನಕ ರಂಜಕ ಪೊಟ್ಯಾಷ್ ಮೆಗ್ನಿಶಿಯಂ ಕ್ಯಾಲ್ಸಿಯಂ (ಸುಣ್ಣ) ಸಲ್ಟರ್ (ಗಂಧಕ) ಮತ್ತು ಕಬ್ಬಿಣ ಸತು ಮ್ಯಾಂಗನೀಸ್ ಮುಂತಾದ 99 ಪೋಷಕಾಂಶಗಳನ್ನು ಮಣ್ಣಿನಿಂದ ವಿಭಜಿಸಿ ಬೆಳೆಗಳ ಬೇರುಗಳಿಗೆ ಪೂರೈಸುವ, ರೋಗ ನಿರೋಧಕ, ಕ್ಯಾನ್ಸರ್ ನಿರೋಧಕ ಶಕ್ತಿ ನೀಡುವ ಸೂಕ್ಷ್ಮಾಣುಗಳಿದ್ದು ಸಗಣಿ ಗೋಮೂತ್ರದ ಮೂಲಕ ಹೊರಗೆ ಬರುವುದರಿಂದ ಹಳ್ಳಿಕಾರ್/ದೇಸೀ ಗೋವುಗಳ ಸಗಣಿ ಮತ್ತು ಗಂಜಲ ಆಧಾರಿತ ಜೀವಾಮೃತದಿಂದ ಬೆಳೆದ ಬೆಳೆಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಕ್ಯಾನ್ಸರ್ ನಿರೋಧಕ ಶಕ್ತಿ ಬರುತ್ತದೆ. ಈ ರೀತಿಯ ಸಮತೋಲನವಾದ ಜೀವಾಣುಗಳು ಮತ್ಯಾವ ಪ್ರಾಣಿಗಳ ತ್ಯಾಜ್ಯದಲ್ಲಿಯೂ ಇಲ್ಲದೇ ಇದ್ದುದರಿಂದ ಹಳ್ಳಿಕಾರ್/ದೇಸೀ ಗೋವುಗಳ ಸಗಣಿ ಮತ್ತು ಗಂಜಲ ಏಕೈಕವಾಗಿದೆ ಪವಿತ್ರವಾಗಿದೆ.

-: ಒಂದನೇ ಬಾರಿ ಮೊದಲ ತಯಾರಿಕೆಯ ವಿಧಾನ :-

ಘಟ್ಟ 1:

  1. ಜೀವಾಮೃತ ತಯಾರಿಕೆಯ 8 ಗಂಟೆ ಮುಂಚಿತವಾಗಿ 30 ಲೀಟರ್ ಸಾಮರ್ಥ್ಯದ ಡ್ರಮ್ ನಲ್ಲಿ 10 ಲೀಟರ್ ನೀರು ಹಾಕಿ 10 ಕೆಜಿ ಹಳ್ಳಿಕಾರ್ ತಾಜಾ ಸಗಣಿ ಹಾಗೂ 6 ಲೀಟರ್ ಗೋಮೂತ್ರ ವನ್ನು ನೆನೆಹಾಕಿ.
  2. ಜೀವಾಮೃತ ತಯಾರಿಕೆಯ 8 ಗಂಟೆ ಮುಂಚಿತವಾಗಿ 2 ಲೀಟರ್ ಸಾಮರ್ಥ್ಯದ ಪಾತ್ರೆ ಅಥವಾ ಜಗ್ ನಲ್ಲಿ ಒಂದೂವರೆ ಲೀಟರ್ ನೀರಿಗೆ ಒಂದು ಕೆಜಿ ವಿಷಮುಕ್ತ ಬೆಲ್ಲವನ್ನು ನೆನೆಹಾಕಿ.
  3.  ಜೀವಾಮೃತ ತಯಾರಿಕೆಯ 2 ಗಂಟೆ ಮುಂಚಿತವಾಗಿ ದ್ವಿದಳಧಾನ್ಯದ ಪುಡಿಯನ್ನು ಒಂದೂವರೇ ಲೀಟರ್ ನೀರಿನಲ್ಲಿ ನೆನೆಹಾಕಿ.

ಘಟ್ಟ 2:

  1. 250 ಲೀಟರ್ ನೀರು ಹಿಡಿಯುವ ಬ್ಯಾರಲ್ ನಲ್ಲಿ 200 ಲೀಟರ್ ನೀರನ್ನು ಸುರಿಯಿರಿ.
  2. 30 ಲೀಟರ್ ಬ್ಯಾರಲ್ ಒಳಗೆ 8 ಗಂಟೆಗಳ ಮುಂಚಿತವಾಗಿ ನೆನೆಹಾಕಿದ ತಾಜಾ ಸಗಣಿ ಮತ್ತು ಗೋಮೂತ್ರವನ್ನು ಚೆನ್ನಾಗಿ ಬೆರೆಸಿ, ಅದರ ಬಗ್ಗಡವನ್ನು 250 ಲೀಟರ್ ಸಾಮರ್ಥ್ಯದ ನೀರು ಶೇಖರಿಸಿದ ಬ್ಯಾರಲ್ ಗೆ ಸುರಿದು ಚೆನ್ನಾಗಿ ಬೆರೆಸಿರಿ.
  3. ನೆನೆಸಿದ ದ್ರವರೂಪದ ವಿಷಮುಕ್ತ ಬೆಲ್ಲದ ನೀರನ್ನು ದೊಡ್ಡ ಬ್ಯಾರಲ್ ಗೆ ಬೆರೆಸಿರಿ.
  4. ನೆನೆಸಿದ ದ್ವಿದಳಧಾನ್ಯದ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕಲಸಿ ದೊಡ್ಡ ಬ್ಯಾರಲ್ ಗೆ ಸುರಿದು ಬೆರೆಸಿರಿ.
  5. ದೊಡ್ಡ ಬ್ಯಾರಲ್ ನಲ್ಲಿ ಮೂಲ ಪದಾರ್ಥಗಳನ್ನು ಬೆರೆಸಿದ ಮೇಲೆ ದೊಣ್ಣೆಯಿಂದ ಎಡ ಭಾಗದಿಂದ ಬಲಭಾಗಕ್ಕೆ ವೃತ್ತಾಕಾರವಾಗಿ ಚೆನ್ನಾಗಿ ತಿರುಗಿಸಿ ಎಲ್ಲವೂ ಸಂಪೂರ್ಣವಾಗಿ ಬೆರೆಯುವಂತೆ ಮಾಡಿರಿ.
  6. ಮೇಲಿನ ಮಿಶ್ರಣವನ್ನು ದಿನಕ್ಕೆ ಬೆಳಿಗ್ಗೆ ಓಮ್ಮೆ ಸಂಜೆ ಒಮ್ಮೆ ಎರಡು ಹೊತ್ತು ದೊಣ್ಣೆಯಿಂದ ಬಲಮುಖವಾಗಿ ಹತ್ತಾರು ಬಾರಿ ಚೆನ್ನಾಗಿ ತಿರುಗಿಸಿ

ಘಟ್ಟ 3:

ಬೆರೆಸಿದ ದ್ರಾವಣವು ಜೀವಾಮೃತವಾಗುವ ವಿಧಾನ ಹಾಗೂ ಉಪಯೋಗಿಸಬಹುದಾದ ಅವಧಿ

ಪ್ರಕ್ರಿಯೆ

ಬೇಸಿಗೆಕಾಲ

ಚಳಿಗಾಲ

ಹುದುಗುವಿಕೆ

2 ದಿನ ಗಳು

4 ದಿನಗಳು

ಉಪಯೋಗಿಸಬಹುದಾದ ಗರಿಷ್ಠ ಅವಧಿ

15 ದಿನಗಳು

15 ದಿನಗಳು

ಒಟ್ಟು ದಿನಗಳು

17 ದಿನಗಳು

19 ದಿನಗಳು

ಜೀವಾಮೃತದಲ್ಲಿ ಗರಿಷ್ಠ ಸಂಖ್ಯೆಯ ಜೀವಾಣುಗಳು ದೊರೆಯಬಹುದಾದ ದಿನಗಳು

ಹುದುಗುವಿಕೆ

2 ದಿನಗಳು

4 ದಿನಗಳು

ಉಪಯೋಗಿಸಬಹುದಾದ ದಿನಗಳು

7ನೇ ದಿನದಿಂದ 12ನೇ ದಿನ

7ನೇ ದಿನದಿಂದ 12ನೇ ದಿನ

9ನೇ ದಿನದಿಂದ 14ನೇ ದಿನ

11ನೇ ದಿನದಿಂದ 16ನೇ ದಿನ

ಎರಡನೇ ಬಾರಿಗೆ ಜೀವಾಮೃತ ತಯಾರಿಕೆ :-

ಕೆಳಭಾಗದಲ್ಲಿ ಉಳಿದ ಉಳಿಕೆ ಹೆಪ್ಪಿಗೆ ಅಂದರೆ ಜೀವಾಮೃತ ದ್ರವರೂಪಕ್ಕೆ ಮತ್ತೊಮ್ಮೆ 180 ಲೀಟರ್ ನೀರು ತುಂಬಿಸಿ, ದಿನಕ್ಕೆ ಎರಡು ಬಾರಿ ಚನ್ನಾಗಿ ವೃತ್ತಾಕಾರವಾಗಿ ದೊಣ್ಣೆಯಿಂದ ತಿರುಗಿಸಿದಾಗ 48 ಗಂಟೆಗೆ ಅಥವಾ 4 ನೆ ದಿನಕ್ಕೆ ಎರಡನೇ ಬಾರಿಗೆ ಜೀವಾಮೃತ ಸಿದ್ಧವಾಗುತ್ತದೆ. ನಂತರ 7-9 ದಿನಕ್ಕೆ ಎರಡನೇ ಬಾರಿಯ ಜೀವಾಮೃತವನ್ನು ಕೆಳಗೆ ಇರುವ ರಂಧ್ರದಿಂದ ಪಡೆಯಬಹುದು, ಮತ್ತೆ ಹೊಸದಾಗಿ ಜೀವಾಮೃತ ಪಡೆಯಲು ಬ್ಯಾರಲ್ ಅನ್ನು ಚನ್ನಾಗಿ ತೊಳೆದು ಸ್ವಚ್ಛ ಮಾಡಿ, ಮತ್ತೆ ಹೊಸ ಪದಾರ್ಥಗಳನ್ನು ಬಳಸಿ ಮೂಲ ಜೀವಾಮೃತ ತಯಾರಿ ಮಾಡಿ.

ಜೀವಾಮೃತದಲ್ಲಿ ಮಣ್ಣಿಗೆ ಉಪಯುಕ್ತವಾದ ಪ್ರಯೋಜನ ಕಾರಿ ಪರಿಣಾಮಕಾರಿಯಾದ ಅನಂತ ಕೋಟಿ ಜೀವಾಣುಗಳ ಸಾಗರವೇ ಇದೇ. ಭೂಮಿತಾಯಿ ಅನ್ನಪೂರ್ಣೆ, ಕಚ್ಚಾ ರೂಪದಲ್ಲಿನ ಪೋಷಕಾಂಶಗಳ ಆಗರ, ಕಚ್ಚಾ ರೂಪದ ಪೋಷಕಾಂಶಗಳನ್ನು ವಿಭಜಿಸಿ ಗಿಡಗಳ ಬೇರುಗಳಿಗೆ ಒದಗಿಸುವ ಕಾರ್ಯ ಜೀವಾಮೃತದಲ್ಲಿರುವ ಜೀವಾಣುಗಳಿಂದ ಸಾಧ್ಯ.

ಈಗಾಗಲೇ ಸಾಕಷ್ಟು ರಾಸಾಯನಿಕ ಬಳಕೆ ಹಾಗೂ ಸಿಂಪರಣೆ ಮಾಡಿ ಮಣ್ಣು ಜರ್ಜಾರಿತವಾಗಿದೆ. ಅದಕ್ಕೆ ಜೀವ ತುಂಬಲು ಹೆಚ್ಚಿನ ಬಾರಿ ಜೀವಾಮೃತ ಬಳಕೆ ಮಾಡುವುದು ಅನಿವಾರ್ಯ.

ತಿಂಗಳಿಗೆ ಎರಡು ಸರ್ತಿ ಎಕರೆಗೆ 200-400 ಲೀಟರ್ ಜೀವಾಮೃತವನ್ನು ಮಣ್ಣಿಗೆ ಸೇರಿಸುತ್ತಾ ಇರಬೇಕು.

ಮಣ್ಣಿಗೆ ನೇರವಾಗಿ ಜೀವಾಮೃತ ಬಳಕೆ ಮಾಡುವುದು ಅತ್ಯುತ್ತಮ ಪದ್ದತಿ, ಇರೋದು ಇರುವ ಹಾಗೇ ಜೀವಾಮೃತವನ್ನ ಮಣ್ಣಿಗೆ ಸೇರಿಸಿದಾಗ ಅದರಲ್ಲಿನ ಪ್ರೀತಿಯ ಜೈವಿಕ

No comments:

Post a Comment