• "ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಗ್ರಹಕ್ಕಾಗಿ ಸಾವಯವವನ್ನು ಬೆಳೆಯಿರಿ." • "ಸ್ವಚ್ಛ ಮತ್ತು ಹಸಿರನ್ನು ಸೇವಿಸಿ - ಸಾವಯವವನ್ನು ಆರಿಸಿ." • "ಹಣಕ್ಕಾಗಿ ಮಾತ್ರವಲ್ಲ, ಹಲವರ ಆರೋಗ್ಯಕ್ಕಾಗಿ ಸಾವಯವ ಕೃಷಿ." • "ಮಣ್ಣನ್ನು ಪೋಷಿಸಿ, ಆತ್ಮವನ್ನು ಪೋಷಿಸಿ - ಸಾವಯವವಾಗಿ ಬೆಳೆಯಿರಿ." • "ಆರೋಗ್ಯಕರ ಭೂಮಿ, ಆರೋಗ್ಯಕರ ಸಸ್ಯಗಳು, ಆರೋಗ್ಯಕರ ಜನರು." • "ನಿಮ್ಮ ರೈತನನ್ನು ತಿಳಿದುಕೊಳ್ಳಿ, ನಿಮ್ಮ ಆಹಾರವನ್ನು ತಿಳಿದುಕೊಳ್ಳಿ - ಸಾವಯವಕ್ಕೆ ಹೋಗಿ." • "ರಾಸಾಯನಿಕ-ಮುಕ್ತ ಮತ್ತು ಆರೋಗ್ಯಕರ - ಅದು ಸಾವಯವ ಭರವಸೆ." • "ಪ್ರಕೃತಿಯ ಉದ್ದೇಶದಂತೆ ಸಾವಯವ ಬೆಳೆ ಬಿತ್ತಿ, ಬೆಳೆಸಿ ಮತ್ತು ತಿನ್ನಿರಿ." • "ಸಾವಯವ: ಪ್ರಕೃತಿಗೂ ಒಳ್ಳೆಯದು, ನಿಮಗೂ ಇನ್ನೂ ಒಳ್ಳೆಯದು." • "ಭೂಮಿಯಿಂದ ಭೂಮಿಗೆ - ಸಾವಯವ ಕೃಷಿ." • "ಸಾವಯವವನ್ನು ಆರಿಸಿ, ಜೀವನವನ್ನು ಆರಿಸಿ." • "ಭೂಮಿಯನ್ನು ಸಂರಕ್ಷಿಸಿ, ಸಾವಯವ ಪದ್ಧತಿಗೆ ಹೋಗಿ." • "ಪೌಷ್ಠಿಕಾಂಶಕ್ಕಾಗಿ ಕ್ರಮ ಕೈಗೊಳ್ಳಿ - ಸಾವಯವ ಕೃಷಿಯನ್ನು ಬೆಂಬಲಿಸಿ." • "ಸುಸ್ಥಿರ ವಿಕಾಸಕ್ಕಾಗಿ ಸಾವಯವ ಕ್ರಾಂತಿಯಲ್ಲಿ ಸೇರಿ." • "ಈಗಲೇ ಕಾರ್ಯನಿರ್ವಹಿಸಿ, ಬುದ್ಧಿವಂತಿಕೆಯಿಂದ ಕೃಷಿ ಮಾಡಿ - ಸಾವಯವಕ್ಕೆ ಹೋಗಿ." • "ರಾಸಾಯನಿಕಗಳನ್ನು ಬಳಸಲು ನಿರಾಕರಿಸು, ಇಂದೇ ಸಾವಯವವನ್ನು ಆರಿಸಿಕೊಳ್ಳಿ!" • "ಭಯಪಡಬೇಡಿ, ಇದು ಸಾವಯವ!" • "ಸಾಂಪ್ರದಾಯಿಕ ಪದ್ಧತಿ ಸ್ವೀಕಾರಾರ್ಹ, ಸಾವಯವ ಪದ್ಧತಿ ಸುಸ್ಥಿರ." • "ವಿಷಕಾರಿಯನ್ನು ತಿರಸ್ಕರಿಸಿ. ಸಾವಯವವನ್ನು ಅಳವಡಿಸಿಕೊಳ್ಳಿ." • "ಶುದ್ಧ ಆಹಾರ ಬೇಕು - ಸಾವಯವ ಆಹಾರ ಬೇಕು." • "ನಮ್ಮ ಗ್ರಹವನ್ನು ಒಂದೊಂದೇ ಜಮೀನಿನಿಂದ ಉಳಿಸಿ - ಸಾವಯವವನ್ನು ಆರಿಸಿ." • "ಸಾವಯವ ಕೃಷಿ: ಭೂಮಿಯನ್ನು ಗುಣಪಡಿಸುವುದು, ಅದರ ಜನರಿಗೆ ಆಹಾರ ನೀಡುವುದು." • "ಉಸಿರಾಡುವ ಗ್ರಹಕ್ಕಾಗಿ ಸಾವಯವವಾಗಿ ಬೆಳೆಯಿರಿ." • "ಸಾವಯವ ಕೈಗಳಿಂದ ಭೂಮಿಯನ್ನು ಬೆಳೆಸಿ." • "ಹಸಿರು ಕೃಷಿ, ಶುದ್ಧ ಆಹಾರ - ಅದು ಸಾವಯವ ಜೀವನ." • "ಸಾವಯವ ಜೇನುಗೂಡುಗಳಿಂದ ಸಮುದಾಯಗಳು ಅಭಿವೃದ್ಧಿ ಹೊಂದುತ್ತವೆ." • "ಒಟ್ಟಾಗಿ, ನಾವು ಸಾವಯವವಾಗಿ ಆರೋಗ್ಯಕರ ಜಗತ್ತನ್ನು ಬೆಳೆಸಬಹುದು." • "ಸ್ಥಳೀಯ, ಸಾವಯವ ಮತ್ತು ಅಭಿವೃದ್ಧಿ ಹೊಂದುತ್ತಿರುವ - ಸಮುದಾಯ ಕೃಷಿ ಅತ್ಯುತ್ತಮವಾಗಿದೆ." • "ಸಾವಯವ ರೈತರು ಭೂಮಿಯ ರಕ್ಷಕರು - ಅವರನ್ನು ಬೆಂಬಲಿಸಿ." • "ಸಮುದಾಯದೊಂದಿಗೆ ಒಗ್ಗಟ್ಟಿನಿಂದ - ಸಾವಯವವಾಗಿ ಕೃಷಿ ಮಾಡೋಣ." • "ನಿಮ್ಮ ತಟ್ಟೆಯಲ್ಲಿ ಸಾವಯವ, ನೀವು ಮೆಚ್ಚಬಹುದಾದ ಆರೋಗ್ಯ." • "ನಿಮ್ಮ ಆರೋಗ್ಯವು ಒಂದು ಹೂಡಿಕೆ, ಖರ್ಚಲ್ಲ. ಸಾವಯವ ಪದ್ಧತಿಯನ್ನು ಅನುಸರಿಸಿ." • "ಬುದ್ಧಿವಂತಿಕೆಯಿಂದ ತಿನ್ನಿರಿ - ಆರೋಗ್ಯಕರ ನಾಳೆಗಾಗಿ ಸಾವಯವವನ್ನು ಆರಿಸಿ." • "ಶುದ್ಧ ಆಹಾರವು ಉತ್ತಮ ಮನಸ್ಥಿತಿಗೆ ಸಮಾನವಾಗಿದೆ - ಸಾವಯವ ಆಹಾರ ಸೇವಿಸಿ." • "ಬಲವಾದ ರೋಗನಿರೋಧಕ ಶಕ್ತಿಗಾಗಿ, ಸಾವಯವಕ್ಕೆ ಹೋಗಿ." • "ಸಾವಯವ ಅಭಿಮಾನಿಯಾಗಿರಿ." • "ಸಾವಯವ: ಏಕೆಂದರೆ ಪ್ರಕೃತಿಗೆ ಚೆನ್ನಾಗಿ ತಿಳಿದಿದೆ." • "ಹೊಸ ಎಲೆಯನ್ನು ತಿರುಗಿಸಿ, ಸಾವಯವ ಕವಲುಗಳನ್ನು ಬಳಸಿ." • "ಅದನ್ನು ನೈಜವಾಗಿಡಿ, ಸಾವಯವವಾಗಿಡಿ." • "ಸಾವಯವವನ್ನು ಕಚ್ಚಿ, ಆರೋಗ್ಯವನ್ನು ಕಚ್ಚಿ." • "ಸಾವಯವ ಕೃಷಿಯಿಂದ ಸುಸ್ಥಿರತೆ ಪ್ರಾರಂಭವಾಗುತ್ತದೆ." • "ಭವಿಷ್ಯವನ್ನು ಕೊಯ್ಲು ಮಾಡಿ - ಇಂದು ಸಾವಯವವಾಗಿ ಗಿಡ ನೆಡಿ." • "ಸುಸ್ಥಿರ, ಜವಾಬ್ದಾರಿಯುತ ಮತ್ತು ಸಾವಯವ." • "ಸುಸ್ಥಿರ ದೃಶ್ಯಕ್ಕಾಗಿ ಹಸಿರು ಬೆಳೆಸಿ, ಸಾವಯವ ಬೆಳೆಸಿ." • "ಬೀಜದಿಂದ ಮೇಜಿಗೆ, ಸುಸ್ಥಿರವಾಗಿ ಸ್ಥಿರ - ಅದು ಸಾವಯವ." down!

ಮನೆಯ ಹಿತ್ತಲಿನಲ್ಲಿ ಎರೆಹುಳು ತೊಟ್ಟಿಯ ಕ್ರಿಯಾತ್ಮಕ ನಿರ್ಮಾಣ ಮಾಡುವದು ಹೇಗೆ? ಹಳ್ಳಿಗಳಲ್ಲಿ ಮನೆಗೊಂದರಂತೆ ಈ ರೀತಿ‌ಮಾಡಿದರೆ ಬಹುಮೂಲದ ಆದಾಯವನ್ನು ಪಡೆಯಬಹುದು.

ಎರೆಹುಳುಗಳನ್ನು ರೈತನ ಮಿತ್ರ ಎನ್ನುತ್ತೇವೆ. ಇವು ಮಣ್ಣನ್ನು ನೈಸರ್ಗಿಕವಾಗಿ ನಿರಂತರವಾಗಿ ಉಳುಮೆ ಮಾಡುತ್ತಿರುತ್ತವೆ. ಜೊತೆಗೆ ಅರ್ಧ ಕೊಳೆತ ಸಾವಯವ ತ್ಯಾಜ್ಯಗಳನ್ನು ಕರಗಿಸಿ ಉತ್ಕ್ರಷ್ಟ ದರ್ಜೆಯ ಗೊಬ್ಬರವನ್ನು ಉತ್ಪತ್ತಿ ಮಾಡುತ್ತವೆ. ಸಾಕಷ್ಟು ಉಪಯೋಗಕಾರಿ ಸೂಕ್ಷ್ಮಾಣುಜೀವಿಗಳು ಎರೆಹುಳುವಿನ ಅನ್ನನಾಳದಲಿರುವದರಿಂದ ಗೊಬ್ಬರದ ಗುಣಮಟ್ಟವು ಉತ್ತಮವಾಗಿರುತ್ತದೆ. ಆದರೇ ಇತ್ತೀಚಿನ ದಿನಗಳಲ್ಲಿ ಎರೆಹುಳುಗಳ ಸಂತತಿ ಸಾಕಷ್ಟು ಕ್ಷೀಣಿಸುತ್ತಿದೆ. ಇದರಿಂದ ಕೃತಕವಾಗಿ ಎರೆಹುಳುಗಳನ್ನು ತೊಟ್ಟಿಯಲ್ಲಿ ಸಾವಯವ ತ್ಯಾಜ್ಯಗಳ ಜೊತೆಗೆ ಸೇರಿಸಿ ಗೊಬ್ಬರದ ಜೊತೆ ಭೂಮಿಗೆ ಸೇರಿಸುವ ವಾಡಿಕೆಯಿದೆ. ಈ ರೀತಿಯ ತೊಟ್ಟಿಯನ್ನು ನಿರ್ಮಿಸಿ, ಅರೆಕೊಳೆತ ಸಾವಯವ ಸಂಯುಕ್ತಗಳು ತ್ಯಾಜ್ಯಗಳನ್ನು ಸೇರಿಸಿ, ಅರ್ಧ ಕೇ.ಜಿ ಯಷ್ಟು ಎರೆಹುಳು ಸೇರಿಸಿ.‌ 


ಎರೆಹುಳು ಏನು ಮಾಡುತ್ತೆ ಗೊತ್ತಾ?

ನಿಮಗೆ ಆಶ್ಚರ್ಯ ಆಗಬಹುದು, ಒಂದು ಅತ್ಯಂತ ಫಲವತ್ತಾದ ಜಮೀನಿನ ಕೆಳಗೆ ಒಂದು ಚದುರ ಭೂಮಿಯಲ್ಲಿ 16 ಎರೆಹುಳುಗಳು ಇರುತ್ತವೆ! ಮಣ್ಣಿನ ಅಡಿಯಲ್ಲಿ ಬಿಡುವಿಲ್ಲದೇ ದುಡಿಯುತ್ತಿರುತ್ತವೆ. ವಾರದ ರಜೆ, ಸಂಬಳ, ವಿಶೇಷ ಭತ್ಯೆ ಏನೂ ತಗೆದುಕೊಳ್ಳದೇ ನಮ್ಮ ಜಮೀನನ್ನು ಉಳುಮೆ ಮಾಡುತ್ತಿರುತ್ತವೆ.

ಒಂದು ಎರೆಹುಳು ಒಂದು ದಿನಕ್ಕೆ ತನ್ನ ದೇಹದ ತೂಕದ ಒಂದೂವರೆ ಪಟ್ಟು ಹೆಚ್ಚು ತೂಕದ ಮಣ್ಣನ್ನು ಅಗೆದು ಹೊರಹಾಕುತ್ತವೆ! ಒಂದು ಎಕರೆಯಲ್ಲಿ ಅಂದಾಜು ಒಂದು ಲಕ್ಷ ಎರೆಹುಳುಗಳು ಇದ್ದಾವೆ ಎಂದು ಲೆಕ್ಕ ಹಾಕಿದರೂ, ಅವುಗಳ ತೂಕ ಸುಮಾರು ಒಂದು ಟನ್. ಇಷ್ಟು ಹುಳುಗಳು ದಿನವೊಂದಕ್ಕೆ ಒಂದೂವರೆ ಟನ್‌ನಷ್ಟು ಮಣ್ಣನ್ನು ಅಗೆಯುತ್ತವೆ. ಹಾಗೆ ಮಣ್ಣು ತಿಂದು ಮಲವಿಸರ್ಜನೆ ಮಾಡಲು ಪ್ರತಿ ರಾತ್ರಿ ಒಂದು ಎರೆಹುಳು ಎಂಟು ಸಲ ಭೂಮಿಯ ಮೇಲ್ಭಾಗಕ್ಕೆ ಬರುತ್ತದೆ! ಪ್ರತಿ ಬಾರಿ ಅದು ಬೇರೆ ಬೇರೆ ದಾರಿಯಲ್ಲೇ ಹೊರಬರುತ್ತದೆ! ಹಾಗೆಯೇ ಬೇರೆ ಹಾದಿಯಲ್ಲಿ ಒಳಹೋಗುತ್ತದೆ!

ಅಂದರೆ ಲೆಕ್ಕ ಹಾಕಿ,

ಒಂದು ರಾತ್ರಿ ಒಂದು ಎರೆಹುಳು ಭೂಮಿಗೆ 14 ರಿಂದ 18 ರಂಧ್ರಗಳನ್ನು ಕೊರೆಯುತ್ತದೆ. ಒಂದು ಅಡಿ ಜಾಗದಲ್ಲಿ 10 ಎರೆ ಹುಳುಗಳಿದ್ದರೆ ಅಲ್ಲಿ ಸುಮಾರು 180 ರಂಧ್ರಗಳಾಗುತ್ತವೆ!

600 ಕೋಟಿ ವರ್ಷಗಳಿಂದ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಗಳಲ್ಲೂ ಎರೆಹುಳು ಬದುಕುಳಿದು ತನ್ನ ಆಸ್ತಿತ್ವವನ್ನು ಕಾಯ್ದುಕೊಂಡಿದೆ. ಭೂಮಂಡಲದ 100 ಜೀವಜಂತುಗಳ ಪೈಕಿ ಅತ್ಯಂತ ಯಶಸ್ವಿ ಜೀವಿಯಾಗಿದೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ದೇಶಿ ಎರೆಹುಳು ಮಣ್ಣನ್ನು ತಿನ್ನುತ್ತಾ 15ರಿಂದ 25 ಅಡಿ ಆಳಕ್ಕೆ ಹೋಗಿ ಬಂದು ದಿನದ 24 ಗಂಟೆಯೂ ಅವಿಶ್ರಾಂತವಾಗಿ ದುಡಿಯುತ್ತದೆ. ಇದರಿಂದ ಮಣ್ಣಿನ ಮೂಲಕ ಭೂಮಿಯ ಒಳಭಾಗಕ್ಕೆ ಗಾಳಿ ಹರಿಯುತ್ತದೆ. ಗಿಡಗಳ ಬೇರಿಗೆ ನೀರು ಒಸರುತ್ತದೆ. ಎರೆಹುಳುವಿನ ಮಲ ನಮ್ಮ ಬೆಳೆಗಳಿಗೆ ಉತ್ಕೃಷ್ಟ ಗೊಬ್ಬರವೂ ಆಗುತ್ತದೆ.

ಹಾಗಾಗಿ ಯಾವಾಗಲೂ ಜಮೀನಿಗೆ ಬೆಂಕಿ ಇಡಬಾರದು, ಕೀಟನಾಶಕ, ಕಳೆನಾಶಕ ಅಥವ ಯಾವುದೇ ರಸಾಯನಿಕ ಬಳಸಬಾರದು ಇರೋದನ್ನು ಬೆಳಸಿಕೊಂಡು ಹೋಗಬೇಕು .ಎರೆಹುಳುವಿನ ಸಂತತಿ ಉಳಿಸಿ..

ಇಲ್ಲಿನ ಮಾದರಿಯಲ್ಲಿ ತೊಟ್ಟಿಯ ಸುತ್ತ ಎರೆಹುಳು ಭಕ್ಷಕಗಳ (ಇಲಿ, ಇರುವೆ, ಹಾವು, ಕೋಳಿ ಇತ್ಯಾದಿ) ಪ್ರವೇಶವನ್ನು ತಡೆಯಲು ತೊಟ್ಟಿಯ ಸುತ್ತ ನೀರಿನ ಗುಂಡಿಯನ್ನು ಮಾಡಲಾಗಿದೆ. ಈ ನೀರಿನಲ್ಲಿ‌ ಅಜೋಲಾವನ್ನು ಸಹ ಸೇರಿಸಿದ್ದಾರೆ. ಅಜೋಲಾ ಒಂದು ನೈಸರ್ಗಿಕ ಸಾರಜನಕದ ಮೂಲ. ಇದನ್ನು ಹಸುಗಳಿಗೆ ಸಹ ಆಹಾರದ ಜೊತೆ ನೀಡುವದರಿಂದ ಹಾಲಿನ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಾಗುತ್ತದೆ. 

ಜೊತೆಗೆ ತೊಟ್ಟಿಯ ಸುತ್ತ ಹಸಿರೆಲೆ ಗೊಬ್ಬರಗಳನ್ನು ನೆಡುವದರಿಂದ ನಿಯಮಿತವಾಗಿ ಹಸಿರೆಲೆಗಳನ್ನು ಕತ್ತರಿಸಿ ತೊಟ್ಟಿಗೆ ಸೇರಿಸಿದರೆ ಬೇಗನೆ ಕೊಳೆತು ಗೊಬ್ಬರವಾಗುತ್ತದೆ. ಸಾಮಾನ್ಯವಾಗಿ ಗ್ಲೈರಿಸೀಡಿಯಾ ವನ್ನು ನೆಡುತ್ತಾರೆ. ಇದನ್ನು ಮೂರು ತಿಂಗಳಿಗೊಮ್ಮೆ ಕತ್ತರಿಸಬಹುದು.

ಇದರ ಜೊತೆಗೆ ನಾಟಿ ಬೀಜಗಳನ್ನು ನೆಡುವದರಿಂದ ದೇಶೀಯ ಬೀಜಗಳನ್ನು ಸಂರಕ್ಷಿಸಬಹುದು. ಬಳ್ಳಿಗಳನ್ನು ಸುಲಭವಾಗಿ ಹಬ್ಬಿಸಬಹುದು. ಮನೆಗೆ ಸಾಕಗುವಷ್ಟು ಕಾಯಿಪಲ್ಲೆಗಳನ್ನು ಸಹ ಬೆಳೆದುಕೊಳ್ಳಬಹುದು. ಬೀಜಗಳನ್ನು ಮಾರಾಟ ಮಾಡಬಹುದು.

ಇದರ ಜೊತೆಗೆ ಎರೆಹುಳು ತೊಟ್ಟಿಯಿಂದ ಎರೆಜಲವನ್ನು ಸಂಗ್ರಹಿಸಿ ಸಸ್ಯಬೆಳವಣಿಗೆಯ ಪ್ರಚೋದಕವಾಗಿ ಉಪಯೋಗಿಸಬಹುದು.

No comments:

Post a Comment